Posted on Leave a comment

ರಾಮು ಕವಿತೆಗಳು – ಪುಸ್ತಕ ಬಿಡುಗಡೆ

ಋತುಮಾನದ ಅಂಗಳದಲ್ಲಿ ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ‘ರಾಮು ಕವಿತೆಗಳು’ ಬಿಡುಗಡೆಯಾಗುತ್ತಿದೆ. ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಔಪಚಾರಿಕತೆಯಿಲ್ಲ. ಕನ್ನಡದ ಇಬ್ಬರು ಹಿರಿಯ ವಿಮರ್ಶಕರಾದ ಓ. ಎಲ್. ನಾಗಭೂಷಣಸ್ವಾಮಿ ಮತ್ತು ಎಚ್. ಎಸ್. ರಾಘವೇಂದ್ರ ರಾವ್ ಇಲ್ಲಿಯ ಕವನಗಳ ಕುರಿತು ಆಪ್ತವಾಗಿ ಮಾತನಾಡುವ ಮೂಲಕ ಈ ಕವನ ಸಂಕಲನವನ್ನ ಕಾವ್ಯಾಸಕ್ತರಿಗೆಲ್ಲ ಪರಿಚಯಿಸುತ್ತಿದ್ದಾರೆ. ಅವರ ಮಾತುಗಳನ್ನು ಆಲಿಸುವ ಮೂಲಕ ಇಂದಿನ ಪುಸ್ತಕ ಬಿಡುಗಡೆಗೆ ನಾವೆಲ್ಲ ಸಾಕ್ಷಿಗಳಾಗೋಣ ಬನ್ನಿ!

ನಾಳೆಯಿಂದ ಕರ್ನಾಟಕದ ಹಲವಾರು ಕಡೆ ಪುಸ್ತಕಗಳು ದೊರೆಯಲಿವೆ. ಅವುಗಳ ಮಾಹಿತಿಯನ್ನು ಋತುಮಾನ ಫೇಸ್ ಬುಕ್ ಪುಟದಲ್ಲಿ ಪ್ರತ್ಯೇಕವಾಗಿ ಹಂಚಿಕೊಳ್ಳಲಾಗುವುದು.

ಪುಸ್ತಕವನ್ನು ಮನೆ ಬಾಗಿಲಿಗೇ ತರಿಸಿಕೊಳ್ಳಬಯಸುವವರು store.ruthumana.com ಗೆ ಭೇಟಿ ಕೊಡಿ.
ಇನ್ನಿತರ ಮಾಹಿತಿಗೆ [email protected] ಅಥವಾ [email protected] ಗೆ ಈ ಮೇಲ್ ಮಾಡಬಹುದು.

ಪುಸ್ತಕ ಕೊಳ್ಳಲು ನೇರ ಕೊಂಡಿ :  http://store.ruthumana.com/product/ramu_kavitegalu/

ರಾಮು ಕವಿತೆಗಳಿಗೆ ಸಂಬಧಪಟ್ಟ ಎಲ್ಲಾ ವಿಡಿಯೋಗಳನ್ನು ಈ ಕೊಂಡಿಯಲ್ಲಿ ನೋಡಬಹುದು : https://goo.gl/NgTkD7


ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ಅನಾಮಧೇಯ ಕವಿಯೊಬ್ಬರ ಕವನ ಸಂಕಲನ ‘ರಾಮು ಕವಿತೆಗಳು‘ ಋತುಮಾನ ಅಂತರ್ಜಾಲ ತಾಣದಲ್ಲಿ ಸೆಪ್ಟೆಂಬರ್ ೧೪ ರಂದು ಬಿಡುಗಡೆಯಾಯಿತು. ವಿಮರ್ಶಕರಾದ ಓ. ಎಲ್. ನಾಗಭೂಷಣಸ್ವಾಮಿ ಮತ್ತು ಎಚ್. ಎಸ್. ರಾಘವೇಂದ್ರ ರಾವ್ ಈ ಕವನ ಸಂಕಲನದ ಇನ್ನೊಂದಷ್ಟು ಪದ್ಯಗಳನ್ನು ಇಲ್ಲಿ ಓದಿದ್ದಾರೆ. ನೀವು ಪುಸ್ತಕವನ್ನು ಋತುಮಾನ ಅಂತರ್ಜಾಲ ಮಳಿಗೆಯ ಈ ಕೊಂಡಿಯಲ್ಲಿ ಖರೀದಿಸಬಹುದು.

http://store.ruthumana.com/product/ramu_kavitegalu/

ಕವಿತೆಯು ಭಾಷೆಯಲ್ಲಿಯೇ ಆಗಬೇಕು ಎಂಬುದನ್ನು ವ್ರತದಂತೆ ಪಾಲಿಸುವ ಇಲ್ಲಿನ ಕವಿತೆಗಳು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಹೊಸ ದನಿಯನ್ನು ಸೇರಿಸುತ್ತಿವೆ. ಮನುಷ್ಯನ ಅಸಾಹಯಕತೆ, ಸಂಭ್ರಮ, ವಿರಾಹ, ವಿಷಾದ, ನೋವು, ಪ್ರತಿಭಟನೆ ಇತ್ಯಾದಿ ಭಾವಗಳನ್ನು ಅತಿ ಸರಳ ಭಾಷೆಯಲ್ಲಿ ಉಸುರುವ ಈ ಕವಿತೆಗಳು ಭಾಷಾಲೋಕದ ಬೆರಗನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕಾರಣದಿಂದಲೇ ತನ್ನದೇ ವಿಶಿಷ್ಠ ಭಾಷೆ ಮತ್ತು ನುಡಿಗಟ್ಟನ್ನು ಸೃಷ್ಟಿಸಿಕೊಂಡಿದೆ.