Description
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮಕ್ಕಳಿಗಾಗಿ ಕಾದಂಬರಿ
ರಚನೆಯ ಕಡೆಗೂ ಇವರಿಗೆ ಒಲವು ಇತ್ತು. ಪ್ರಸ್ತುತ ‘ಆರೋಹಣ ಮುಂಬರಲಿರುವ
ವಿಜ್ಞಾನ-ತಂತ್ರಜ್ಞಾನದ (ಭವಿಷ್ಯ ಸೂಚಕ) ಕಥಾಹಂದರವನ್ನು ಒಳಗೊಂಡಿದೆ.
ಕಾದಂಬರಿ ರಚನಾಕೌಶಲವೂ ವೈಶಿಷ್ಟ್ಯಮಯವಾಗಿದೆ’ ಎಂದವರು ಹೇಳಿದ್ದರು.
ಇಲ್ಲಿರುವ ಹನ್ನೊಂದು ಅಧ್ಯಾಯಗಳಲ್ಲಿ (ಪ್ರತಿಯೊಂದರಲ್ಲೂ) ಸರಿಯಾಗಿ 350
ಪದಗಳು! ಇಷ್ಟೊಂದು ಕರಾರುವಾಕ್ಕಾಗಿ ರಚಿಸಿ ಬೆರಗುಗೊಳಿಸಿದ್ದರು.
ಈ ಕಾದಂಬರಿಯ ಕೊನೆಯಲ್ಲಿ ರೋಚಕವಾಗಿ ತಿರುವು ತರಲು ಮಕ್ಕಳಲ್ಲಿ
ಇನ್ನಷ್ಟು ಕುತೂಹಲ ಮೂಡಿಸಲು ಏನೋ ಒಂದಿಷ್ಟು ಬೇಕೆನಿಸಿ ಕೊನೆಯ
ಅಧ್ಯಾಯವನ್ನು ವಿಸ್ತರಿಸಿ ಸೇರಿಸಿದೆ. ಇದೆಲ್ಲ ಮಕ್ಕಳಿಗೆ ಒಪ್ಪಿಗೆ ಆಗುತ್ತದೆ ಎಂಬ
ನಂಬಿಕೆ.
ಈ ಕೃತಿ ಮಕ್ಕಳಿಗೆ ಮುಟ್ಟುತ್ತ, ಒಂದು ಬಗೆಯಲ್ಲಿ ಭೈರನಟ್ಟಿ ಅವರ
ಸ್ನೇಹಕ್ಕೆ ಕೃತಜ್ಞತೆ ಹೇಳಿದ ಹಾಗಾಗಿದೆ.
ಮತ್ತಷ್ಟು ಕಾದಂಬರಿಗಳೊಂದಿಗೆ ಮುಂದೆ ಭೇಟಿಯಾಗೋಣ.
– ಆನಂದ ಪಾಟೀಲ
(ಮುನ್ನುಡಿಯಿಂದ)
Reviews
There are no reviews yet.