ಬಯಲರಸಿ ಹೊರಟವಳು

120.00

Add to Wishlist
Add to Wishlist
Email

Description

ಛಾಯಾ ಭಟ್ ಅವರ ಕಥೆಗಳು ಸಮಕಾಲೀನ, ಸಮಾಜದ ಸಂಸಾರ ಸಂಬಂಧಗಳನ್ನು ಒಡಲಲ್ಲಿಟ್ಟುಕೊಂಡ ಕಥೆಗಳು. ಇವು ಮಡಂಬ ಪತ್ತನ ದ್ರೋಣ ಮುಖಗಳ ಸಂಚಾರವನ್ನು ಉದ್ದೇಶಿಸಿ ಹೊರಟ ಮಹತ್ವಾಕಾಂಕ್ಷೆ ಕಥೆಗಳಲ್ಲವಾದರೂ ದೂರದಲ್ಲೆಲ್ಲೋ ಸುನಾಮಿ ಇದ್ದರೆ ಅದರ ಪರಿಣಾಮಿ ಅಲೆಗಳು ಅದರ ಪ್ರತಿ ನಾಡಿನಲ್ಲೆಲ್ಲಾ ಕಂಪನದಂತೆ ಪುಟ್ಟ ಜಗತ್ತಿನಲ್ಲಿ ಅಲೆಗಳನ್ನು ಕಾಣುವಂತವು. ಈ ‘ಕಾಣುವ’ ರೀತಿ ತನ್ನ ಕಣ್ಣಿನ ಸತ್ಯವನ್ನೇ ಅಂತಿಮ ಎಂದು ನಂಬುವ ರೀತಿಯಲ್ಲಿಲ್ಲ ಸ್ತ್ರೀವಾದ, ಪ್ರಾದೇಶಿಕತೆ, ಜಾತಿ ,ವರ್ಗ ಮುಂತಾದ ಸಿದ್ಧಾಂತಗಳ ನೆಲೆಗಟ್ಟುಗಳನ್ನು ಬಳಸಿ ಹೇಳಬೇಕಾಗುತ್ತದೆ ಎನ್ನುವ ಸ್ಟ್ರಾಟಜಿ ರೈಟಿಂಗ್ ಕೂಡ ಅಲ್ಲ. ಈ ಬಗೆಯ ಮಹತ್ವಕಾಂಕ್ಷೆಯ ಗುರಿಯಿರದ ಕಥೆಗಳು ಏಕಾಂತದಲ್ಲಿ ಕೆಲವು ಮಾನವೀಯ ಪ್ರಶ್ನೆಗಳನ್ನು ಎತ್ತಬಲ್ಲವು. ಛಾಯಾ ಭಟ್ ಅವರ ಕಥೆಗಳು ಸಮಕಾಲೀನ ಬರವಣಿಗೆಯಲ್ಲಿರುವ ಕೆಲವು ಚಹರೆಗಳನ್ನು ಬಿಟ್ಟುಕೊಟ್ಟಿವೆ ಉದಾಹರಣೆಗೆ ಅವರಿಗೆ ಸ್ತ್ರೀವಾದಿ ನೆಲೆಯಲ್ಲಿ ಕಥೆಕಟ್ಟುವ ಅವಕಾಶವಿದ್ದರೂ ಅವರು ಅದನ್ನು ಬಿಟ್ಟುಕೊಟ್ಟು ಕಥೆ ಹೇಳುವ ರೀತಿಯನ್ನು ರೂಡಿಸಿಕೊಂಡಿದ್ದಾರೆ. ಜಾತಿ ಲಿಂಗ ಮತ್ತು ವರ್ಗಗಳ ನಿಲೆಗಳಲ್ಲಿ ನಿಂತು ಲೋಕ ನೋಡುವುದು ಒಂದು ಬಗೆಯ ಜಾಡನ್ನು ನಿರ್ಮಿಸುತ್ತದೆ. ಅದು ಹಾಗೆ ಆಗಬೇಕೆಂದೇ ಅಸ್ಮಿತೆಗಳು ಮುನ್ನೆಲೆಗೆ ಬಂದಿದ್ದು ಆದರೆ ಕ್ರಮೇಣ ಅಸ್ಮಿತೆಗಳು ಸ್ಥಿರಗೊಳ್ಳುತ್ತದೆ ತೊಡಗಿದವು ಉದ್ದೇಶಪೂರ್ವಕವಾಗಿ ಐಡೆಂಟಿಟಿ ಗಳನ್ನು ಹೇಳಿಕೊಳ್ಳುವುದು ಕಥೆಗೆ ತೊಡಕಾಗುತ್ತದೆ. ಹೊಸ ತಲೆಮಾರಿನ ಕೆಲವು ಲೇಖಕ-ಲೇಖಕಿಯರಾದರೂ ತಮ್ಮ ಅಸ್ಮಿತೆಗಳನ್ನು ತಿಳಿಸಿ ಏನಾದರೂ ಹೇಳಬೇಕು ಎನ್ನುವ ತಹತಹ ಹೊಂದಿದ್ದಾರೆ. ಛಾಯಾ ಬಟ್ಟ ಅವರಂತಹ ಹೊಸ ತಲೆಮಾರಿನ ಲೇಖಕಿ ಈ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಎನಿಸುತ್ತದೆ.  ಇದರಿಂದ ಪೊಲಿಟಿಕಲಿ ಕರೆಕ್ಟ್ ಅನಿಸುವುದರಿಂದ ಧಾಟಿಯಿಂದಲೂ ಹೊರಬರಲು ಸಾಧ್ಯವಿದೆ.

Reviews

There are no reviews yet.

Be the first to review “ಬಯಲರಸಿ ಹೊರಟವಳು”

Your email address will not be published.