ಭಾರತದ ಬೌದ್ಧಿಕ ದಾರಿದ್ರ್ಯ

70.00

Add to Wishlist
Add to Wishlist
Email

Description

ವಿ. ಆರ್. ನಾರ್‍ಲಾ ಅವರು ಬರೆದಿರುವ ’ಭಾರತದ ಬೌದ್ಧಿಕ ದಾರಿದ್ರ್ಯ’ ಕೃತಿ ಧರ್ಮದ ಅಫೀಮಿಗೆ ತುತ್ತಾದ ಮನಸ್ಥಿತಿಗಳನ್ನು ವಿಶ್ಲೇಷಿಸುತ್ತದೆ. ಭಾವನಾತ್ಮಕ ಅಂಶಗಳೆಲ್ಲವನ್ನು ಬೌದ್ಧಿಕ ಬಡತನ ದೊಡ್ಡದಾಗಿ ಸ್ವೀಕರಿಸುತ್ತಿದೆ ಬದಲಿಗೆ ವಿಮರ್ಶೆಗೆ ಹಚ್ಚುವುದಿಲ್ಲ. ಪರಿಣಾಮ ಕಾಲ ಮುಂದಕ್ಕೆ ಸರಿದರೂ ಸಮಾಜ ಹಿಂದಕ್ಕೆ ಹೋಗುತ್ತಿದೆ. ಈ ಬಗೆಯ ಪ್ರಗತಿ ವಿರೋಧಿ ನಿಲುವು ಸಮಾಜಕ್ಕೆ ಮಾರಕವಾಗಿದೆ ಎಂದು ಕೃತಿ ಆತಂಕ ತೋಡಿಕೊಳ್ಳುತ್ತದೆ.

ಮನುಕುಲದ ಕಣ್ಣು ತೆರೆಸಬೇಕಿದ್ದ ಧರ್ಮಗಳು ವಿಷಕಾರುವ ಕೂಪಗಳಾಗಿರುವುದು, ವಿಜ್ಞಾನದ ಬದಲು ಅಜ್ಞಾನ ಮನೆ ಮಾಡುತ್ತಿರುವುದು, ಸಮಾನತೆಯ ಜಾಗದಲ್ಲಿ ಅಸಮತೆ ಹಾಜರಿ ಹಾಕಿರುವುದನ್ನು ಪುಸ್ತಕ ವಿರೋಧಿಸುತ್ತದೆ. ಪ್ರೊ. ಬಿ. ಗಂಗಾಧರ ಮೂರ್ತಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

Reviews

There are no reviews yet.

Be the first to review “ಭಾರತದ ಬೌದ್ಧಿಕ ದಾರಿದ್ರ್ಯ”

Your email address will not be published.