Description
ಚಿಂತಕರೂ, ಹಿರಿಯ ವಿದ್ವಾಂಸರೂ ಆದ ಲಕ್ಷ್ಮೀಶ ತೋಳ್ಪಾಡಿ ಅವರ ’ಭಾರತ ಯಾತ್ರೆ’ ಪುಸ್ತಕವು ಪ್ರಜಾವಾಣಿಯ ಮುಕ್ತಛಂದದಲ್ಲಿ ಪ್ರಕಟವಾಗುತ್ತಿದ್ದ “ಮಹಾಭಾರತ ಅನುಸಂಧಾನ’ದ ಅಂಕಣಬರಹಗಳ ಸಂಗ್ರಹ. ಮಹಾಭಾರತ ಹಲವಾರು ಕವಲೊಡೆದ ಜೇಡರಬಲೆಯಂತಹ ಸಂಕೀರ್ಣ ಹಾದಿ, ಹಲವಾರು ಉಪಕತೆಗಳ ಚಿಲುಮೆ. ಶಬ್ದದಾಚೆಯ ನಿಶ್ಶಬ್ದದ ದನಿಯಾದ ಲಕ್ಷ್ಮೀಶ ತೋಳ್ಪಾಡಿಯವರು ಮಹಾಭಾರತದ ಮಂಥನವನ್ನು ವರ್ಣಮಯ ಪಾತ್ರಗಳು, ಸನ್ನಿವೇಶಗಳ ಮೂಲಕ ತಮ್ಮ ಆಧ್ಯಾತ್ಮಿಕ ನಿಗೂಢತೆಯನ್ನು ಜೀವನ ಪ್ರೀತಿಯ ಸರಳತೆಯನ್ನಾಗಿ ಕಾಣುವ ತುಡಿತದಲ್ಲಿಯೇ ಇವರ ಮಾತು, ಬರಹಗಳು ಸಾಗುವಂತದ್ದು.
ಮಹಾಭಾರತವನ್ನು ಅರ್ಥ ಮಾಡಿಕೊಳ್ಳುವುದು, ಇದರ ಜೊತೆಗೆ ಸಾಗುವುದು ಸರಳವಾದ ವಿಷಯವಲ್ಲ,ಮಹಾಭಾರತದ ಒಳಗಿನಿಂದಲೇ ಒಂದು ಕೇಶಪಾಶ ಪ್ರಪಂಚ ನಮ್ಮೆದುರು ತೀರ ಪ್ರಕಟಗೊಳ್ಳುವುದು ದೊಡ್ಡದೊಂದು ಬೀಸಿನಲ್ಲಿ ಬದುಕನ್ನು ನೋಡಬಯಸುವಂತಹ ಮತ್ತು ಕೇವಲ ಪಠ್ಯವಾಗಿ ಅಂತಿಮ ಅರ್ಥಕ್ಕೆ ಸಿಲುಕದೆ, ನಿಲುವಿಗೆ ತಲುಪದೆ ಸದಾ ಭಾಷೆ- ಬದುಕುಗಳ ನಡುವೆ ತೂಗುತ್ತಿರುವ ತೊಟ್ಟಿಲಿನಂತೆ ’ಭಾರತ ಯಾತ್ರೆ’ ಪ್ರಕಟಗೊಂಡಿದೆ.
Reviews
There are no reviews yet.