Description
ಚಾನ್ನೆ ಹನ್ನೆರಡು ಕತೆಗಳಿರುವ ಕಥಾಸಂಕಲನ. ಈ ಸಂಕಲನದ ಕತೆಗಳ ಬಗ್ಗೆ ಕತೆಗಾರ ವಸುಧೇಂದ್ರ ಅವರು ’ಹೈದರಾಬಾದ್ ಕರ್ನಾಟಕದಿಂದ ಹಲವಾರು ಉತ್ತಮ ಕತೆಗಾರರು ಇತ್ತೀಚಿನ ದಿನಗಳಲ್ಲಿ ಹೊರಹೊಮ್ಮಿದ್ದಾರೆ. ಅವರೆಲ್ಲರಿಗೂ ಅಮರೇಶ್ ನುಗಡೋಣಿಯವರೇ ಆದರ್ಶ ಕತೆಗಾರರಾಗಿರುವುದರಿಂದ ಅವರ ಕಥನ ಕ್ರಮ ಅನುಸರಿಸುವ ಸಹಜ ಗುಣ ಅವರಲ್ಲಿ ಕಂಡು ಬರುತ್ತದೆ. ಆದರೆ ಅಂತಹ ಯಾವ ಪ್ರಭಾವವೂ ಕಾಣಿಸದ ಮುದಿರಾಜ್ ಕಥನ ಕ್ರಮ ನನಗೆ ಸೋಜಿಗವನ್ನುಂಟು ಮಾಡಿದೆ. ಗುಂಪಿನೊಡನಿದ್ದೂ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳುವ ಅವರ ಈ ಶಕ್ತಿ ಅವರ ಮುಂದಿನ ಬರವಣಿಗೆಯನ್ನು ಕುತೂಹಲದಿಂದ ಕಾಯುವಂತೆ ಮಾಡುತ್ತವೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ..
Reviews
There are no reviews yet.