Description
ಯೂನಿವರ್ಸಿಟಿಗಳ ಮರುಭೂಮಿಯಲ್ಲಿ ಚಾಂದ್ ಅಥವಾ ಹಾಜೀರ ಅಂತವರ ಕವಿತೆಗಳು ಕಣ್ಣಿಗೆ ಬಿದ್ದಾಗ ಓಯಾಸಿಸ್ ಕಂಡಂತಾಗುತ್ತದೆ. ಈ ಕವಿಗಳು ಮಂಡಿಸುತ್ತಿರುವ ಮೈನಾರಿಟಿ ಸಮುದಾಯಗಳ ದಿಗ್ಬ್ರಮೆ ಗಳಿಗೆ ಹೊಸಕಾಲದ ಹುಡುಗ ಮತ್ತು ಹುಡುಗಿಯರು ಸ್ಪಂದಿಸಿ ಈ ನಿತ್ಯ ಹಿಂಸಾಮಯ ನಾಡಿನಲ್ಲಿ ಸಾಮರಸ್ಯದ ಜಲ ಸಿಂಪಡಿಸಬಲ್ಲರು ಎನ್ನಿಸತೊಡಗುತ್ತದೆ. ಇಷ್ಟಾದರೂ ಚಂದ್ ತರದವರು ಹಲವು ತರಹದ ವಸ್ತುಗಳನ್ನು ಶೋಧಿಸಬಲ್ಲ ಸಹಜ ಕವಿ ಸ್ವಾತಂತ್ರ್ಯಕ್ಕಾಗಿ ಸೇರಿಸುವುದು ಹಾಗೂ ಕಾಲದ ಸಾಮಾಜಿಕ ಕಾವ್ಯಮೀಮಾಂಸೆಗಳ ಒತ್ತಡದಿಂದಾಗಿ ತಮ್ಮ ಕಾವ್ಯಗಳು ಏಕತಾನ ಗೊಳ್ಳದಂತೆ ಅತ್ಯಂತ ಮುಖ್ಯ. ಅನನ್ಯ ಕವಯಿತ್ರಿ ಲಲಿತ ಸಿದ್ಧಬಸವಯ್ಯ. ಸೂಕ್ಷ್ಮ ಕಥೆಗಾರ ಜೆ.ಪಿ. ಬಸವರಾಜ ಚಾಂದ್ ಪ್ರತಿಭೆಯನ್ನು ಗುರುತಿಸಿ ಕೊಟ್ಟ ಸಂಗಾತ ಕಾವ್ಯ ಪ್ರಶಸ್ತಿ ಈ ಚಂದ್ರ ಕವಿಯ ಬೆಳದಿಂಗಳು ಹರಡಲು ಸ್ಪೂರ್ತಿಯಾಗಲಿ. ಕನ್ನಡ ಕಾವ್ಯಲೋಕದ ಚಾಂದ್ ತರಹದ ಕವಿಗಳನ್ನು ಸದಾ ಅಪ್ಪಿಕೊಳ್ಳುತ್ತಿರಲಿ8
Reviews
There are no reviews yet.