Description
ವಿಶಿಷ್ಟ, ಪ್ರತಿಭಾನ್ವಿತ, ಪ್ರಮುಖ ಕವಿಗಳೇ ತುಂಬಿರುವ ಈ ಜಗತ್ತಿನಲ್ಲಿ ರಾಜು ಹೆಗಡೆ ಸಾಧಾರಣ ಕವಿ. ಅವರ ಕವಿತೆಗಳಲ್ಲಿ ದಾರ್ಶನಿಕತೆಯ ಸೋಗಿಲ್ಲ. ದಿವ್ಯದ ಅನುಭೂತಿಯನ್ನು ದಾಟಿಸುವ ಕ್ರಮವಿದೆಯೇ ಹೊರತು, ಕವಿ ತಾನೇ ದಿವ್ಯವಾಗುವ ಹವಣಿಕೆ ಇಲ್ಲ. ಅವರ ಕವಿತೆಗಳ ಸಿಂಪ್ಲಿಸಿಟಿ ಹೇಗಿರುತ್ತವೆ ಎಂದರೆ – ವಾಕಿಂಗ್ ಹೋಗುವವರು ಕೈಬೀಸಿಕೊಂಡು ಹೋಗುವಂತೆ ಬದುಕಿನ ಹಗಲು ರಾತ್ರಿಗಳು ಉರುಳುತ್ತಿರುತ್ತವೆ, ದುಃಖದ ಸ್ಮಶಾನದಲ್ಲಿ ಇರುವಾಗಲೂ ಇರುವೆ ಕಚ್ಚುತ್ತದೆ, ಮತ್ತು ಮೈ ತುಂಬ ಹೊಳೆಯುವ ಉದ್ದನೆಯ ಜುಬ್ಬಕ್ಕೆ ತನ್ನೊಳಗಿರುವವನಿಗೆ ಜೀವ ಇದೆಯೊ ಇಲ್ಲವೋ ಎನ್ನುವುದು ಗೊತ್ತಿದ್ದಂತಿಲ್ಲ. ರಾಮು ಕವಿತೆಗಳು, ನಕ್ಷತ್ರ ಕವಿತೆಗಳು, ನಕ್ಷತ್ರ ದೇವತೆ ಕವನ ಸಂಕಲನಗಳಿಗೆ ಪ್ರೀತಿಯಿಂದ ಸ್ಪಂದಿಸಿದ ಓದುಗರು, ದೈನಂದಿನದ ಒಳಗೆ ದಿವ್ಯವನ್ನು ಆವಾಹಿಸುವ ರಾಜು ಹೆಗಡೆಯವರ ಕವಿತೆಗಳನ್ನು ಸ್ವೀಕರಿಸುತ್ತಾರೆ ಎನ್ನುವ ನಂಬಿಕೆಯಲ್ಲಿ.
Reviews
There are no reviews yet.