Description
ಲೇಖಕ ಗುರುಪ್ರಸಾದ್ ಕಂಟಲಗೆರೆ ಅವರು ರಚಿಸಿದ ಕಥಾಸಂಕಲನ ’ಕೆಂಡದ ಬೆಳುದಿಂಗಳು’ . ಈ ಕೃತಿಗೆ ಮುನ್ನುಡಿ ಬರೆದ ರಘುನಾಥ ಚ.ಹ. ಅವರು ’ಸಾಮಾಜಿಕ ನ್ಯಾಯದ ಬಗೆಗಿನ ಮಾತುಗಳು ಅಸಂಬದ್ಧ ಪ್ರಲಾಪದಂತೆ ಮುಖ್ಯವಾಹಿನಿಯ ಹಲವರಿಗೆ ಕಾಣಿಸುತ್ತಿರುವ ಹಾಗೂ ಬಹುತ್ವ, ಸಾಮರಸ್ಯ, ಸಮಾನತೆಯಂಥ ಶಬ್ಧಗಳೆಲ್ಲ ಸವಕಲಾಗಿರುವ ವಿಚಿತ್ರ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ಈ ವಿರೋಧಾಭಾಸವನ್ನು ’ಕೆಂಡದ ಬೆಳುದಿಂಗಳು’ ಶೀರ್ಷಿಕೆ ಹಿಡಿದಿಡುವಂತಿದೆ’ ಎಂದು ಉಲ್ಲೇಖಿಸಿದ್ದಾರೆ.
’ಜನಪ್ರಿಯ ಕಥನ ಶೈಲಿಯನ್ನು ತೊರೆದು ರೂಪಾತ್ಮಕ ಮಾರ್ಗದ ಹುಡುಕಾಟ ಇಲ್ಲಿನ ಕಥೆಗಳಲ್ಲಿ ಬೀಜರೂಪದಲ್ಲಿದೆ’ ಎಂದು ಬೆನ್ನುಡಿ ಬರೆದಂತಹ ಜಿ.ಬಿ.ಆನಂದಮೂರ್ತಿ ಪ್ರಶಂಸಿಸಿದ್ದಾರೆ.
Reviews
There are no reviews yet.