ವಿಂಗಡಣೆ
- ಕೃತಿಗಳು (2582)
- ಕಾದಂಬರಿ (300)
- ಸಮಗ್ರ (27)
- ಲೇಖನ ಸಂಗ್ರಹ (892)
- ಕಾವ್ಯ (206)
- ಜೀವನ ಕಥನ (188)
- ಚಿತ್ರ ಕಥನ (9)
- ವಿಮರ್ಶೆ (78)
- ಕಥಾ ಸಂಕಲನ (320)
- ಸಾಹಿತ್ಯ ಪತ್ರಿಕೆ (5)
- ಮಕ್ಕಳ ಸಾಹಿತ್ಯ (430)
- ನಾಟಕ (109)
- ಇತರೆ (32)
- ಪ್ರವಾಸ ಕಥನ (5)
- English Books (6)
- ಪ್ರಕಾಶಕರು (1835)
- ಅಭಿನವ (245)
- ಆಕೃತಿ ಪುಸ್ತಕ (21)
- ಸಂಚಯ (3)
- ಲಡಾಯಿ ಪ್ರಕಾಶನ (201)
- ರಾಗಮಾಲ (10)
- ಪ್ರಕೃತಿ (5)
- ರಾಘವೇಂದ್ರ ಪ್ರಕಾಶನ (1)
- ಅಹರ್ನಿಶಿ (88)
- ಕ್ರಿಯಾ ಪುಸ್ತಕ (34)
- ಛಂದ ಪುಸ್ತಕ (74)
- ಓಲೆಬೆಲ್ಲ ಪುಸ್ತಕ (1)
- ಜೆ.ಎನ್.ಯು ಕನ್ನಡ ಪೀಠ (5)
- ಚಿಂತನ ಪುಸ್ತಕ (27)
- ಕುವೆಂಪು ಭಾಷಾಭಾರತಿ ಪ್ರಾದಿಕಾರ (4)
- ನಿವೇದಿತಾ ಪ್ರಕಾಶನ (2)
- ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ (66)
- ಕಾವ್ಯಮನೆ ಪ್ರಕಾಶನ (2)
- ಕಿಟಕಿ ಪ್ರಕಾಶನ (1)
- ಅಭಿಜ್ಞಾನ (1)
- ಸಂಗಾತ (29)
- ಸಮಾಜಮುಖಿ (1)
- ಸಂಕಥನ (16)
- ದೀಪಂಕರ (4)
- ಪರಸ್ಪರ (8)
- ಅಕ್ಷರ ಪ್ರಕಾಶನ (174)
- ಪಂಚಮಿ (8)
- ನವಕರ್ನಾಟಕ (13)
- ಲಂಕೇಶ್ ಪ್ರಕಾಶನ (1)
- ಕನ್ನಡ ವಿ.ವಿ. ಹಂಪಿ (2)
- ನಾಕುತಂತಿ (1)
- ಪಲ್ಲವ ಪ್ರಕಾಶನ (92)
- ಬಂಡಾರ ಪ್ರಕಾಶನ (2)
- ಸಹಜ ಪ್ರಕಾಶನ (1)
- ವಿಶ್ವಪಥ ಪ್ರಕಾಶನ (2)
- ಕಾನ್ ಕೇವ್ ಮಿಡಿಯಾ (11)
- ಸ್ನೇಹ ಬುಕ್ ಹೌಸ್ (12)
- ಸಪ್ನ ಬುಕ್ ಹೌಸ್ (3)
- ನುಡಿ ಪುಸ್ತಕ (2)
- ಕಾಜಾಣ ಪುಸ್ತಕ (2)
- ರೂಪ ಪ್ರಕಾಶನ (12)
- ಸಾಹಿತ್ಯಸುಧೆ ಪ್ರಕಾಶನ (1)
- ಡಿ ವಿ ಕೆ ಮೂರ್ತಿ (1)
- ಅಕೃತಿ ಆಶಯ ಪಬ್ಲಿಕೇಶನ್ (2)
- ಕಥನ (10)
- ಚಾಣಕ್ಯ ಪ್ರಕಾಶನ (1)
- ನಿರಂತರ ಪ್ರಕಾಶನ (1)
- ಆನಿಮ (2)
- ಪರಾಗ ಪುಸ್ತಕ (1)
- ಆನ್ಶುಕ ಪ್ರಕಾಶನ (1)
- ಶ್ರಮಣ ಪ್ರಕಾಶನ (1)
- ಚಿಂತನ ಚಿತ್ತಾರ (5)
- ದೇಸಿ ಪುಸ್ತಕ (26)
- ಸಮನ್ವಿತ (2)
- ವಿಲೀನ ಪ್ರಕಾಶನ (1)
- ಸೃಷ್ಠಿ ಪ್ರಕಾಶನ (29)
- ಸಂವಹನ ಪ್ರಕಾಶನ (2)
- ಸಿರಿವನ ಪ್ರಕಾಶನ (1)
- ಎಮ್.ಐ.ಎಸ್. ರೀಡ್ ಬುಕ್ಸ್ (1)
- ವಂಶಿ (28)
- ಸಾಹಿತ್ಯಲೋಕ ಪ್ರಕಾಶನ (4)
- ಪುಳಕ ಪುಸ್ತಕ (1)
- ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ (3)
- ಸಾಗರಿ ಪ್ರಕಾಶನ (1)
- ಇತಿಹಾಸ ದರ್ಪಣ ಪ್ರಕಾಶನ (5)
- ಅಂಕಿತ ಪುಸ್ತಕ (18)
- ಪಾಂಚಾಲಿ ಪಬ್ಲಿಕೇಷನ್ಸ್ (1)
- ಸಂಸ್ಕೃತಿ (1)
- ಬೆನಕ ಬುಕ್ ಬ್ಯಾಂಕ್ (1)
- ಚಿಗುರು ಪುಸ್ತಕ (1)
- ಇಂಪನ ಪುಸ್ತಕ (3)
- ಸೃಜನ ಪ್ರಕಾಶನ ಮಂಡ್ಯ. (1)
- ಶ್ರೀರಾಮ ಪ್ರಕಾಶನ ಮಂಡ್ಯ (2)
- ಟುಲಿಕ ಬುಕ್ಸ್ (88)
- ಮನೋಹರ ಗ್ರಂಥ ಮಾಲ (217)
- ಅನುಗ್ರಹ (1)
- ಅಮೂಲ್ಯ ಪುಸ್ತಕ (2)
- ಅಸೀಮ ಅಕ್ಷರ (1)
- ಜ್ಯೋತಿ ಪ್ರಕಾಶನ (1)
- ಮಲೆನಾಡು ಪ್ರಕಾಶನ (1)
- ಅಪರಂಜಿ ಪ್ರಕಾಶನ (1)
- ಟೆಕ್ ಫಿಜ಼್ (9)
- ಕಾನ್ಕೇವ್ ಮೀಡಿಯಾ (1)
- ವೈಷ್ಣವಿ ಪ್ರಕಾಶನ (6)
- ವಸಂತ ಪ್ರಕಾಶನ (1)
- ನೆಲೆ ಪ್ರಕಾಶನ (1)
- ಗೋಮಿನಿ ಪ್ರಕಾಶನ (4)
- ವಿಕಾಸ ಪ್ರಕಾಶನ (17)
- ಚಿಗುರೆಲೆ ಪ್ರಕಾಶನ (1)
- ಪ್ರಸಾರಂಗ (1)
- ಎಲ್ಲರ ಪುಸ್ತಕ (9)
- ಹೂವಿನಹೊಳೆ ಪ್ರಕಾಶನ (1)
- ಸಮಕಾಲೀನ ಪುಸ್ತಕ (2)
- ವಿಜಯಕಲ್ಯಾಣ ಪ್ರಕಾಶನ (1)
- ಕಾವ್ಯಾಲಯ ಪ್ರಕಾಶನ (1)
- ಮಣಿಪಾಲ್ ಯುನಿವರ್ಸಲ್ ಪ್ರೆಸ್ (1)
- ಬಹುರೂಪಿ (8)
- ಇಷ್ಟ ಪ್ರಕಾಶನ (1)
- ಋತ (8)
- ಕನ್ನಡ ಪುಸ್ತಕ ಪ್ರಾಧಿಕಾರ (1)
- ಕರ್ನಾಟಕ ಸಾಹಿತ್ಯ ಅಕಾಡೆಮಿ (1)
- ಸ್ವಪ್ರಕಾಶನ (1)
- ಸಿರಿ ಸಮೃದ್ಧಿ ಪ್ರಕಾಶನ (1)
- ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ (1)
- ಪ್ರಿಸಮ್ ಬುಕ್ಸ್ (3)
- ಚಿತ್ರ ಪುಸ್ತಕ (1)
- ಗೌರಿ ಮೀಡಿಯಾ ಟ್ರಸ್ಟ್ (4)
- ಋತುಮಾನ (11)
- ಸ್ವೀಟ್ ಹೋಮ್ ಪಬ್ಲಿಕೇಶನ್ಸ್ (1)
- ವಿಹಾನ್ ಪಬ್ಲಿಷರ್ಸ್ (1)
- ಅದರ್ ಬುಕ್ಸ್ (1)
- ಅಲಿಸಿರಿ ಬುಕ್ಸ್ (1)
- ಕವಿತಾ ಪ್ರಕಾಶನ (1)
- ಕಾಮಧೇನು ಪುಸ್ತಕ ಭವನ (1)
- ಮುತ್ತುಪ್ಪಾಡಿ ಪುಸ್ತಕ (1)
- ಪ್ರಿಸಂ ಬುಕ್ಸ್ (1)
- ಧರಣಿ ಪ್ರಿಂಟರ್ಸ್ (1)
- ಸನ್ಮತಿ ಪ್ರಕಾಶನ (1)
- ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ (1)
- ಎಂ. ಮುನಿಸ್ವಾಮಿ ಅಂಡ್ ಸನ್ಸ್ (1)
- ಪ್ರಜೋದಯ ಪ್ರಕಾಶನ (1)
- ಸಾಹಿತ್ಯ ಭಂಡಾರ (2)
- ಥಿಯೇಟರ್ ತತ್ಕಾಲ್ (6)
- ಕನ್ನಡ ನಾಡು ಪ್ರಕಾಶನ (2)
- ಸಾಗರ ಪ್ರಕಾಶನ (2)
- ಇನ್ಸೈಟ್ ಪಬ್ಲಿಕ (5)
- ಭಾರತ ಜ್ಞಾನ ವಿಜ್ಞಾನ ಸಮಿತಿ - ಕರ್ನಾಟಕ (14)
- ಸಾಹಿತ್ ಪ್ರಕಾಶನ (1)
- ನಿರಂಕುಶ ಪ್ರಕಾಶನ (1)
- ಸಂಗಾತ ಪುಸ್ತಕ (2)
- ಅಂಕುರ ಪ್ರಕಾಶನ (1)
- ದೇಸಿ (1)
- ಕಾವ್ಯಕಲಾ ಪ್ರಕಾಶನ (2)
- ಜನ ಪ್ರಕಾಶನ (3)
- ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ (1)
- ಹೇಮಂತ ಸಾಹಿತ್ಯ (1)
- ವಿಶ್ವ ಪ್ರಕಾಶನ (1)
- ಹರಿವು ಬುಕ್ಸ್ (1)
- ಕನ್ನಡ ಗಣಕ ಪರಿಷತ್ತು (1)
- ಸಿರಿವರ ಪ್ರಕಾಶನ (1)
- ಅಭಿರುಚಿ ಪ್ರಕಾಶನ (1)
- ಐ ಬಿ ಎಚ್ (1)
- ಜಲಜಂಬೂ ಲಿಂಕ್ಸ್ (1)
- ಸವನ್ನ ಬುಕ್ಸ್ (1)
- ಗೀತಾಂಜಲಿ ಪಬ್ಲಿಕೇಷನ್ಸ್ (1)
- ಸಿ ವಿ ಜಿ ಇಂಡಿಯಾ (1)
- ಆಕಾರ ಪ್ರಕಾಶನ (1)
- ವಿಕಸನ (1)
- ಕವಿ ಪ್ರಕಾಶನ (1)
- ಕನ್ನಡ ಸಂಘ (1)
- ಕಿರಂ ಪ್ರಕಾಶನ (1)
- ಪಿತಾಮಹ ಪ್ರಕಾಶನ (1)
- ಪುತಿನ ಟ್ರಸ್ಟ್ (1)
- ಬಹುವಚನ (2)
- ಕೌದಿ ಪ್ರಕಾಶನ (5)
- ಮೊಗ್ಗು (1)
- Uncategorized (9)
- ಇನ್ನಿತರೆ (54)
- ಖಾದಿ (40)
- ಕ್ಯಾಲೆಂಡರ್ (1)
- ಪೋಸ್ಟರ್ ಫ್ರೇಮ್ (1)
- ಗ್ರೀಟಿಂಗ್ಸ್ (1)
ಪ್ರತಿಕ್ರಿಯೆಗಳು
-
ಕರಾವಳಿಯ ಸಾವಿರದೊಂದು ದೈವಗಳು
Rated 5 out of 5by Rama chandra Bhat -
ಹೊಸಗನ್ನಡ ಕವಿತೆ
Rated 5 out of 5by Mala -
ಹೊಸಗನ್ನಡ ಕವಿತೆ
Rated 5 out of 5by Mala -
ಬಸವ ವಚನ ವಾಚಿಕೆ
Rated 3 out of 5by AMARESH M PATIL -
ಕರ್ನಾಟಕ ಯುಗಪುರುಷ ಪಂ. ತಾರಾನಾಥರು
Rated 4 out of 5by vishwanath -
ಅಭಿನಯ ಕಲಿಸಲು ಸಾಧ್ಯವಿಲ್ಲ
Rated 4 out of 5by Vinay -
ಬೆಂಕಿ ಬೆಡಗು
Rated 4 out of 5by Pradeep Naik -
ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ
Rated 2 out of 5by Harshitha -
ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ
Rated 4 out of 5by Harshitha -
ದೇವರ ಗೊಡವೆ ಕೂಡ ನನಗೆ ಬೇಡ! (ಮಿರ್ಜಾ ಗಾಲಿಬ್ ಜೀವನ ದರ್ಶನ)
Rated 4 out of 5by Dyavappa . M
Abhishek S –
||• ಪ್ರಿಯೇ ಚಾರುಶೀಲೆ •||
5/5
“ಸಾಮಾನ್ಯವಾಗಿ ಹೊಸ ಬರಹಗಾರರ ಪುಸ್ತಕಗಳನ್ನು ಓದುವಾಗ ಹಳೆ ಬರಹಗಾರರನ್ನೇ ಓದಿದಂತೆ ಅನಿಸುತ್ತದೆ. ಬೇಂದ್ರೆ ಅಜ್ಜನದ್ದೋ, ಬೆಳಗೆರೆಯವರದ್ದೋ, ಭೈರಪ್ಪನವರದ್ದೋ ಇನ್ನೊಬ್ಬ ಬರಹಗಾರರದ್ದೋ ಶೈಲಿ ನುಸುಳಿ ಹೋಗಿರುತ್ತದೆ”
ನಾಗರಾಜ ವಸ್ತಾರೆ ಎಂಬ ಅದ್ಭುತ ಲೇಖಕ ಈ ಮೇಲಿನ ಥಿಯರಿಗೆ ಹೊರತಾಗಿದ್ದಾರೆ. ಅವರದ್ದೇ ವಿಭಿನ್ನ ಶೈಲಿಯನ್ನು ಬಳಸಿ ಓದುಗರನ್ನು ಬೆಕ್ಕಸ ಬೆರಗಾಗಿಸುತ್ತಾರೆ. ಈ ಪುಸ್ತಕ ೨೦೧೯-೨೦ರ ಪ್ರಸ್ತುತತೆ, ಕಂಗ್ಲೀಷ್, ಭಾಷಾ ಪ್ರಯೋಗ, ವಸ್ತು ವೈಶಿಷ್ಟ್ಯ, ನಿರೂಪಣೆ ಎಲ್ಲದರಲ್ಲೂ ನವೀನ ಎನಿಸುತ್ತದೆ. ಹೆಸರೇ ಎಷ್ಟು ಮೋಹಕ – “ಪ್ರಿಯೇ… ಚಾರುಶೀಲೆ”. ಹೆಸರಿನಿಂದಲೇ ಒಂದು ಅಪರಿಚಿತ ಮುಗುಳ್ನಗು ಮೂಡಿಸಬಲ್ಲ ಪುಸ್ತಕದ ಒಡಲು ಇನ್ನೂ ಮೋಹಕ!!!
ಪುಸ್ತಕಗಳನ್ನು ಮುಖಪುಟ ನೋಡಿ ನಿರ್ಧರಿಸಬೇಡಿ ಎಂಬ ಮಾತು ಚಾಲ್ತಿಯಲ್ಲಿದೆ. ಹಲಬಾರಿ ಇದು ನಿಜವೂ ಕೂಡ. ಹಾಗೇ ಕೇವಲ ಪುಸ್ತಕದ ಹೆಸರಿಗೆ ಆಕರ್ಷಿತನಾಗಿ ಈ ಪುಸ್ತಕ ಕೊಂಡುಕೊಂಡೆ. ಪುಸ್ತಕ ನಿರಾಸೆ ಮಾಡಲಿಲ್ಲ!!! ಪುಸ್ತಕದ ಒಡಲು ಹೀಗೆ ಇಷ್ಟೇ ಎಂದು ಬರೆಯುವುದು ಸುಲಭವಲ್ಲ. ಅಪರಿಚಿತ ಜಾಗದಲ್ಲಿ ಭೇಟಿಯಾಗುವ ಅಪರಿಚಿತ ಜೀವಗಳು ಬೆರೆಯುವ, ಮೊರೆಯುವ, ಕರೆಯುವ, ತೆರೆಯುವ, ಮುರಿಯುವ ಸುಂದರ ಕಥಾಹಂದರವನ್ನು ಹೊತ್ತು ಪ್ರಿಯೇ ಚಾರುಶೀಲೆ ಸಾಗುತ್ತದೆ.
ಇಲ್ಲಿ ಹೆಚ್ಚು ಪಾತ್ರಗಳ ಗೌಜು ಗೊಂದಲ ಗದ್ದಲಗಳಿಲ್ಲ, ಈಗಾಗಲೇ ರಾಶಿ ರಾಶಿ ಬರೆದಿಟ್ಟಿರುವ ಜಾತಿ ಮತಗಳಿಲ್ಲ, ಮತ್ತದೇ ಪ್ರೀತಿ ಪ್ರೇಮ ಊಹೂಂ ಅದು ಇಲ್ಲ. ಇಡೀ ಪುಸ್ತಕವೇ ಒಂದು ಕೌತುಕ. ಓದುಗನೆದೆಗೆ ತೋಂತನನಗಳ ಸುರಿದು ತಾನು ಬರಿದಾಗಿ ಓದುಗನಲೊವನು ಸುರಿದುಕೊಳ್ಳುವ ಮನಮೋಹಕ ಕಾದಂಬರಿ ಪ್ರಿಯೇ ಚಾರುಶೀಲೆ!!!
ಎರಡೇ ಮುಖ್ಯ ಪಾತ್ರಗಳು ಸಮರ್ಥವಾಗಿ ಇಡೀ ಕಾದಂಬರಿಯನ್ನು ಹೊತ್ತಿವೆ. ಅವರದೇ ನಿರೂಪಣೆ, ನವಿರು ಸಂಭಾಷಣೆ. ಅವನು ಮಾತಿಗೊಮ್ಮೆ ಮೀಸೆಯ ಮೇಲೆ ಕೈ ಇರಿಸಿ ನಕ್ಕರೆ ಇವಳು ಘಳಿಗೆಗೊಮ್ಮೆ ಅದನ್ನು ನೋಡಿ ನಾಚುವ ಹಸಿಬಿಸಿ ಭಾವ. ಅವಳು ಮತ್ಸ್ಯ ಕನ್ಯೆಯೇನೋ ಎಂಬ ಮಟ್ಟಿಗಿನ ಅವನ ಭ್ರಮಾ ಭಾವ, ಹೀಗೆ ಹಲವಾರು ಸುಂದರ ವೈಶಿಷ್ಟ್ಯ ವೈಚಿತ್ರ್ಯಗಳು ಓದುಗನಿಗೆ ಆಪ್ಯಾಯ ಭಾವವನ್ನು ಉಳಿಸುತ್ತವೆ.
ಪುಸ್ತಕಗಳು ಮನಸಿನಲ್ಲುಳಿಯಬೇಕು, ಕಾಡಬೇಕು, ಎಡಬಿಡದೆ ಯೋಚನೆಗೀಡು ಮಾಡಬೇಕು ಎಂಬ ಸಿದ್ದಾಂತವಿರಿಸಿಕೊಂಡು ಓದುವವರಲ್ಲಿ ನಾನು ಒಬ್ಬ. ಹಾಗಾಗಬೇಕು ಎಂದರೆ ವಿಷಯ ಗಹನವಾಗಿರಬೇಕು ಎಂಬ ಪೂರ್ವಾಗ್ರಹವನ್ನು ನನ್ನೊಳಗೆ ಸೃಷ್ಟಿಸಿಕೊಂಡಿದ್ದೆ. ಪ್ರಿಯೇ ಚಾರುಶೀಲೆಯ ವಿಷಯ ಗಹನವೋ ಅಲ್ಲವೋ ಎಂಬುದು ಪ್ರತಿ ಓದುಗನ ತರ್ಕಕ್ಕೆ ಸೀಮಿತವಾಗಲಿದೆ. ಆದರೆ ಸೀಮಾತೀತವಾಗಿರುವುದು ಕಾದಂಬರಿ ಓದುವಾಗಿನ ಅನುಭವ. ಪುಸ್ತಕ ಮನಸಿನಲ್ಲುಳಿಯುತ್ತದೆ, ಕಾಡುತ್ತದೆ. ಸಿಹಿಯಾಗಿ… ನವಿರಾಗಿ… ಹಸಿರಾಗಿ… ಬೆಳಕಾಗಿ… ಬದುಕಾಗಿ… ಪ್ರಿಯೇ ಚಾರುಶೀಲೆ ಎಂಬ ಹೆಸರು ಸೃಷ್ಟಿಸಿದ ಮುಗುಳ್ನಗು ಪುಸ್ತಕದುದ್ದಕ್ಕೂ ಮರೆಯಾಗುವುದಿಲ್ಲ. ಅವರೇ ನಾವೋ, ನಾವೇ ಅವರೋ, ಅವರು ನಾವುಗಳಿಗೆಲ್ಲ, ನಾವು ಅವರುಗಳಿಗೆಲ್ಲಾ ಇದುವೇ ತಾವೋ. ಹಾ! ದಿಸ್ ಬುಕ್ ಇಸ್ ಬೇಯಾಂಡ್ ಅವರ್ ಇಮ್ಯಾಜಿನೇಷನ್!!! ಇರಲಿ…
ಅಲ್ಲಲ್ಲಿ ಬರುವ ಕವಿ ಜಯದೇವನ ಅಷ್ಟಪದಿಗಳು ಪುಸ್ತಕವನ್ನು ಇಂದು ಚಂದಗಾಣಿಸಿವೆ. ಪುರಿಯ ಜಗನ್ನಾಥನ ಸನ್ನಿಧಿಯಲ್ಲಿ ಜರುಗುವ ಈ ಕಥೆಯೊಂದಿಗೆ ಜಯದೇವನ ಕವಿತೆಗಳಿದ್ದರೆ ಓದುಗ ಸಮ್ಮೋಹಿತನಾಗದೇ ಇರಲಾರ. ಜೊತೆಗೆ ಇತಿಹಾಸದ ಪರಿಚಯವೂ ಇದೆ. ಬೋರು ಹಿಡಿಸದಷ್ಟು. ಒಟ್ಟಿನಲ್ಲಿ ಎಲ್ಲವೂ ಎಷ್ಟು ಬೇಕೋ ಅಷ್ಟು. ಅಷ್ಟೇ. ಅಪರಿಚಿತ ಜಾಗವಾದ ಪುರಿಯಲ್ಲಿ ಸಿಕ್ಕ ಅಪರಿಚಿತ ಜೀವಗಳಾವುವು? ಅವರ ಕಥನವೇನು? ಪುಸ್ತಕದ ಒಡಲಾದರೂ ಏನು? ಊಹಿಸಬೇಡಿ. ನಿಮ್ಮ ಊಹೆ ತಪ್ಪಾಗಿರಲಿದೆ. ಇದೊಂದು ಪುಸ್ತಕವನ್ನು ಓದಿ. ಹೊಸತನಕ್ಕಾಗಿ, ಪ್ರಸ್ತುತತೆಗಾಗಿ!!!
ಶುಭವಾಗಲಿ…
ಅಭಿ…