Sale!

ಕವಿರನ್ನವಿರಚಿತಮ್ ‘ಸಾಹಸಭೀಮವಿಜಯಮ್’

230.00

Add to Wishlist
Add to Wishlist
Email

Description

ಸಂಪಾದಕರು: ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ

ಪ್ರಕಾಶನ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ

******************

ರನ್ನ ಕವಿಯ (ಕ್ರಿ.ಶ. 993) ‘ಸಾಹಸಭೀಮವಿಜಯಮ್’ (‘ಗದಾಯುದ್ಧಮ್’) ಎಂಬ ಜನಪ್ರಿಯ, ವಿದ್ವಜ್ಜನಪ್ರಿಯ ಚಂಪೂಕಾವ್ಯದ (ಸು.1000) ಹೊಸ ಪರಿಷ್ಕರಣವಿದು.

ಹಸ್ತಪ್ರತಿಗಳ ಲಭ್ಯತೆಯ ಕೊರತೆ, ಪಾಠನಿರ್ಣಯದ ಹಲವು ಬಗೆಯ ಕ್ಲೇಶಗಳು ಇವುಗಳ ನಡುವೆಯೇ ಈ ಪರಿಚಿತಪಠ್ಯವನ್ನು ವ್ಯಾಕರಣ-ಛಂದಸ್ಸು, ಅರ್ಥ-ಆಶಯ ಇವುಗಳ ದೃಷ್ಟಿಯಿಂದ ಇನ್ನಷ್ಟು ಉತ್ತಮಪಡಿಸುವ ಒಂದು ಸಂಪಾದಕೀಯ ಪ್ರಯತ್ನ ಇಲ್ಲಿಯದು. ಈ ಪ್ರಯತ್ನದಿಂದ ಕಾವ್ಯದ ವಾಚನ-ವ್ಯಾಖ್ಯಾನಗಳಿಗೆ, ಅಧ್ಯಯನ ಸಂಶೋಧನೆಗಳಿಗೆ ಹೆಚ್ಚು ಅನುಕೂಲವಾಗುವುದೆಂದು ಸಂಪಾದಕರ, ಪ್ರಕಾಶಕರ ನಿರೀಕ್ಷೆಯಾಗಿದೆ.

ಕಾವ್ಯಾಭ್ಯಾಸದ ಸಾಧನಸಾಮಗ್ರಿಯನ್ನು ಹೆಚ್ಚಿಸುವ ಅನುಬಂಧಗಳಲ್ಲಿ ಕೂಡ ಕೆಲವು ಹಳೆಯ ವಿಮರ್ಶೆ ವಿವೇಚನೆಗಳು ಇನ್ನಷ್ಟು ಪರಿಷ್ಕಾರಗೊಂಡಿವೆ, ಹೊಸ ಸಂಗತಿಗಳು ಸೇರಿವೆ. ಇವುಗಳ ಅನುಕ್ರಮ :

1. ಸಂಪಾದಕೀಯ ಪಾಠಪಟ್ಟಿಕೆ

2. ಪಾಠವಿಚಾರದ ಟಿಪ್ಪಣಿಗಳು

3. ವಸ್ತುವಿಚಾರದ ಟಿಪ್ಪಣಿಗಳು

4. ಐತಿಹಾಸಿಕ ವಿವರಗಳು : ವಿಶ್ಲೇಷಣೆ, ವಂಶಾವಳಿ

5. ಶಬ್ದಾರ್ಥಕೋಶ

6. ಹಸ್ತಪ್ರತಿಗಳ ಸೂಚಿ, ಪೀಳಗೆ ಮತ್ತು ಪರಿಷ್ಕರಣಗಳು

7. ಪದ್ಯಗಳ ಅಕಾರಾದಿ ಸೂಚಿ,

ಪ್ರೊ. ತೀ.ನಂ. ಶ್ರೀಕಂಠಯ್ಯನವರ ‘ ರನ್ನ ಕವಿ ಮತ್ತು ಅವನ ಕೃತಿಗಳು’ ಎಂಬ ಉಚಿತವಿಸ್ತಾರದ ಉಪನ್ಯಾಸ-ಲೇಖನ ಈ ಪರಿಷ್ಕರಣದ ಪೀಠಿಕೆಯಾಗಿದ್ದು, ಕವಿಕಾವ್ಯಪರಿಚಯದ ಹಾಗೂ ಸಹೃದಯ ವಿಮರ್ಶೆಯ ಒಂದು ಸೊಗಸಾದ ಪ್ರವೇಶಿಕೆಯೇ ಆಗಿದೆ.

(ಬೆನ್ನುಡಿಯಿಂದ)

Reviews

There are no reviews yet.

Be the first to review “ಕವಿರನ್ನವಿರಚಿತಮ್ ‘ಸಾಹಸಭೀಮವಿಜಯಮ್’”

Your email address will not be published.