ಸಾವಿನ ದಶಾವತಾರ

150.00

Add to Wishlist
Add to Wishlist
Email

Description

ಕೆ.ಸತ್ಯನಾರಾಯಣ ವಿಕಲ್ಪ ಕಾದಂಬರಿ ಬರೆದ ಎರಡು ವರುಷದ ನಂತರ ಬರೆದ ಕಾದಂಬರಿ ‘‘ಸಾವಿನ ದಶಾವತಾರ’’. ಕಾದಂಬರಿ ಸಲೀಸಾಗಿಸಾಗುವ ಸವಕಲು ದಾರಿಯನ್ನು ತ್ಯಜಿಸಿ ಹೊಸದಾದ ಚಿಕಿತ್ಸಕವಾದ ನಿರೂಪಣೆಯ ಕ್ರಮವನ್ನು ಕಟ್ಟಲು ‘‘ಸಾವಿನ ದಶಾವತಾರ’’ ಪ್ರಯತ್ನಿಸುತ್ತದೆ. ಕಾದಂಬರಿಗೆ ಕಥೆಯ ಬೇಸ್ ಇಲ್ಲದೇ ಚಲನೆಗೆ ತೊಡಗಬೇಕಾಗಿದೆ. ಸೃಷ್ಟಾತ್ಮಕವಾಗಿ ಇಲ್ಲಿನ ನಿರೂಪಕ ತಾನು ಕಂಡ ವಿವಿಧ ಸಾವಿನ ಸಮಗ್ರ ಪರಿಕಲ್ಪನೆಯ ಚಿತ್ರಣವು ಕಾದಂಬರಿಯ ಹಲವು ಸ್ತರಗಳಲ್ಲಿ ಹರಿಯುತ್ತದೆ. ಕೆ. ಸತ್ಯನಾರಾಯಣ ಅವರ ಸಾವಿನ ದಶಾವತಾರ ಕಾದಂಬರಿ ಕೂಡ ಇಂಥ ಭಿನ್ನ ಶೈಲಿಯಿಂದ ರಚಿತಗೊಂಡ ಯಶಸ್ವಿ ಪ್ರಯೋಗವಾಗಿದೆ. ಇಲ್ಲಿನ ಕಾದಂಬರಿಯ ಶೈಲಿ ವಿಶಿಷ್ಟವಾಗಿದ್ದು ಕಥಾ ನಾಯಕನ ಸ್ವಗತದ ನಿರೂಪಣೆಯು ಮುಕ್ಕಾಲು ಭಾಗವಿದ್ದು ಇನ್ನುಳಿದ ಭಾಗದಲ್ಲಿಯೂ ಕಾದಂಬರಿಯ ಪ್ರಮುಖ ಪಾತ್ರಗಳು ಬಂದರೂ ಅವನ್ನೂ ಕಥಾ ನಾಯಕನೇ ನಿರೂಪಿಸುತ್ತಾನೆ.

Reviews

There are no reviews yet.

Be the first to review “ಸಾವಿನ ದಶಾವತಾರ”

Your email address will not be published.