Description
ಅಡ್ಯನಡ್ಕ ಕೃಷ್ಣಭಟ್ಟರು ಕನ್ನಡ ವಿಜ್ಞಾನ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆಯನ್ನು ನೀಡಿದವರು. ಕೇಂದ್ರ ಸರಕಾರ ನೀಡುವ ವಿಜ್ಞಾನ ಸಂವಹನಕ್ಕಾಗಿ ಇರುವ ಜೀವಮಾನ ಪ್ರಶಸ್ತಿಯನ್ನು ಪಡೆದವರು. ವಿಜ್ಞಾನ ಲೇಖನಗಳ ಸಂಪಾದನೆ ಹಾಗೂ ಬರೆವಣಿಗೆಯ ಬಗ್ಗೆ ಆಳವಾಗಿ ಚಿಂತಿಸಿದವರು. ಬಾಲವಿಜ್ಞಾನ ಪತ್ರಿಕೆಯನ್ನು ದಶಕಗಳ ಕಾಲ ನಡೆಸಿದವರು. ಹಲವು ಹೊಸ ವಿಜ್ಞಾನ ಪತ್ರಿಕೆಗಳನ್ನು ಹುಟ್ಟು ಹಾಕಿದವರು. ಇವರು ವಿವಿಧ ಕಾಲಘಟ್ಟದಲ್ಲಿ ಬರೆದ ಲೇಖನಗಳು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿಯನ್ನು ಗುರುತಿಸುವುದಲ್ಲದೆ, ವಿಜ್ಞಾನ ಚರಿತ್ರೆ ಹಾಗೂ ಭಾಷೆಯ ಬಳಕೆಯ ದೃಷ್ಟಿಯಿಂದಲೂ ಅಧ್ಯಯನ ಯೋಗ್ಯ.
Reviews
There are no reviews yet.